
9th June 2025
ಕೇಂದ್ರ ವರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಜೂನ್ ೦೯, ೨೦೨೫ ರಂದು ಪುದುಚೇರಿ ವಿಧಾನಸಭೆಗಾಗಿ ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ (ಓeಗಿಂ) ಅನ್ನು ಉದ್ಘಾಟಿಸಿದರು. ಇದು ಪಾರರ್ಶಕ, ದಕ್ಷ ಮತ್ತು ಪರಿಸರ ಸ್ನೇಹಿ ಆಡಳಿತದತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ಪುದುಚೇರಿ ಲೆಫ್ಟಿನೆಂಟ್ ಗರ್ನರ್ ಶ್ರೀ ಕೆ. ಕೈಲಾಶನಾಥನ್, ಪುದುಚೇರಿ ಮುಖ್ಯಮಂತ್ರಿ ಶ್ರೀ ಎನ್. ರಂಗಸಾಮಿ, ಪುದುಚೇರಿ ವಿಧಾನಸಭೆಯ ಸ್ಪೀಕರ್ ಶ್ರೀ ಆರ್. ಸೆಲ್ವಂ ಅವರು ಕರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಉದ್ಘಾಟನೆಯೊಂದಿಗೆ, ಪುದುಚೇರಿಯು ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ದೃಷ್ಟಿಕೋನಕ್ಕೆ ಅನುಗುಣವಾಗಿ ಓeಗಿಂ ವೇದಿಕೆಯನ್ನು ಅಳವಡಿಸಿಕೊಂಡ ದೇಶದ ೧೯ ನೇ ಶಾಸನಸಭೆಯಾಗಿದೆ. ಕಾಗದರಹಿತ ಶಾಸಕಾಂಗ ಕರ್ಯವನ್ನು ಸಕ್ರಿಯಗೊಳಿಸುವ ಈ ಉಪಕ್ರಮಕ್ಕೆ ಸಂಸದೀಯ ವ್ಯವಹಾರಗಳ ಸಚಿವಾಲಯವು ಶೇ.೧೦೦ ಕೇಂದ್ರ ನೆರವಿನ ಹಣಕಾಸು ಒದಗಿಸುತ್ತದೆ.
ಕರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಡಾ. ಎಲ್. ಮುರುಗನ್, "ಓeಗಿಂ ಒಂದು ಪರಿರ್ತನಾಶೀಲ ಉಪಕ್ರಮವಾಗಿದ್ದು, ಇದು ಶಾಸಕಾಂಗ ಪ್ರಕ್ರಿಯೆಗಳಿಗೆ ನೈಜ-ಸಮಯದ ಪ್ರವೇಶವನ್ನು ಖಚಿತಪಡಿಸುತ್ತದೆ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಇದು 'ಒಂದು ರಾಷ್ಟ್ರ, ಒಂದು ಅಪ್ಲಿಕೇಶನ್' ತತ್ವವನ್ನು ಪ್ರತಿಬಿಂಬಿಸುತ್ತದೆ, ಜೊತೆಗೆ 'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ಮತ್ತು ಪ್ರಸ್ತಾವಿತ 'ಒಂದು ರಾಷ್ಟ್ರ, ಒಂದು ಚುನಾವಣೆ' ಯಂತಹ ಮಹತ್ವದ ಸುಧಾರಣೆಗಳನ್ನು ಪ್ರತಿಬಿಂಬಿಸುತ್ತದೆ. ಕಾನೂನುಗಳನ್ನು ಹೇಗೆ ರಚಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಮತ್ತು ವೀಕ್ಷಿಸುವ ಹಕ್ಕು ಸರ್ವಜನಿಕರಿಗೆ ಇದೆ" ಎಂದು ಹೇಳಿದರು.
ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ಕಳೆದ ದಶಕದ ಪ್ರಮುಖ ಸಾಧನೆಗಳನ್ನು ವಿವರಿಸಿದ ಸಚಿವರು, ಭಾರತವು ಡಿಜಿಟಲ್ ವಹಿವಾಟುಗಳಲ್ಲಿ ಎರಡನೇ ಅತಿದೊಡ್ಡ ರಾಷ್ಟ್ರವಾಗುತ್ತಿದೆ, ನೇರ ಲಾಭ ರ್ಗಾವಣೆ (ಡಿಬಿಟಿ) ಮೂಲಕ ಕಲ್ಯಾಣ ಯೋಜನೆಗಳ ಪರಿಣಾಮಕಾರಿ ವಿತರಣೆಯಾಗುತ್ತಿದೆ, ಆತ್ಮನರ್ಭರ ಭಾರತದ ಅಡಿಯಲ್ಲಿ ತಾಂತ್ರಿಕ ಪ್ರಗತಿಯಾಗಿದ್ದು, ಇದರ ಪರಿಣಾಮವಾಗಿ ರಕ್ಷಣಾ ಆಮದುಗಳಲ್ಲಿ ಶೇ.೫೦ ಕಡಿತವಾಗಿದೆ ಎಂದು ಹೇಳಿದರು.
ಭಾರತದ ಬೆಳವಣಿಗೆಗೆ ಮೂಲಸೌರ್ಯ ಅಭಿವೃದ್ಧಿ ಮತ್ತು ಸಾಮಾಜಿಕ ಬಂಡವಾಳ ಎರಡು ಪ್ರಮುಖ ಸ್ತಂಭಗಳಾಗಿವೆ ಎಂದು ಅವರು ಒತ್ತಿ ಹೇಳಿದರು ಮತ್ತು ೨೦೪೭ ರ ವೇಳೆಗೆ ಭಾರತವು ವಿಕಸಿತ ಭಾರತವಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಪುದುಚೇರಿಯ ಲೆಫ್ಟಿನೆಂಟ್ ಗರ್ನರ್ ಅವರು ಓeಗಿಂ ಉದ್ಘಾಟನೆಯನ್ನು ಒಂದು ಮೈಲಿಗಲ್ಲು ಎಂದು ಶ್ಲಾಘಿಸಿದರು, ಇದು ಶಾಸಕಾಂಗ ಕರ್ಯವನ್ನು ಡಿಜಿಟಲೀಕರಣಗೊಳಿಸುವುದಲ್ಲದೆ, ಕರ್ಯಕಲಾಪಗಳ ನೇರ ಪ್ರಸಾರವನ್ನು ಸಕ್ರಿಯಗೊಳಿಸುತ್ತದೆ, ಹೆಚ್ಚಿನ ಸರ್ವಜನಿಕ ಪ್ರವೇಶ ಮತ್ತು ಪಾರರ್ಶಕತೆಯನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು. ಈ ಕ್ರಮವು ಡಿಜಿಟಲ್ ಇಂಡಿಯಾ, ಗೋ ಗ್ರೀನ್ ಮತ್ತು ಉತ್ತಮ ಆಡಳಿತವನ್ನು ಬೆಂಬಲಿಸುವ ಮೂಲಕ ವರ್ಷಿಕವಾಗಿ ೩–೫ ಟನ್ ಕಾಗದವನ್ನು ಉಳಿಸುತ್ತದೆ ಎಂದು ಅವರು ಹೇಳಿದರು.
ಓeಗಿಂ ನ ವೈಶಿಷ್ಟ್ಯಗಳ ಕುರಿತು ಶಾಸಕರು ಮತ್ತು ಸಿಬ್ಬಂದಿಗೆ ತರಬೇತಿ ನೀಡುವ ಅಗತ್ಯವನ್ನು ಅಧಿಕಾರಿಗಳು ಒತ್ತಿ ಹೇಳಿದರು. ಅಪ್ಲಿಕೇಶನ್ ನ ಸುಗಮ ಅನುಷ್ಠಾನಕ್ಕಾಗಿ ಜಾಗೃತಿ ಅಭಿಯಾನಗಳು ಮತ್ತು ಸಾರ್ಥ್ಯ ವೃದ್ಧಿ ಗೋಷ್ಠಿಗಳನ್ನು ನಡೆಸಲಾಗುವುದು.
ಓeಗಿಂ ಡಿಜಿಟಲ್ ಇಂಡಿಯಾ ಕರ್ಯಕ್ರಮದ ಅಡಿಯಲ್ಲಿ ಒಂದು ಮಿಷನ್ ಮೋಡ್ ಯೋಜನೆಯಾಗಿದ್ದು, ಕಾಗದರಹಿತ, ದಕ್ಷ ಮತ್ತು ನಾಗರಿಕ-ಕೇಂದ್ರಿತ ಶಾಸಕಾಂಗ ಪ್ರಕ್ರಿಯೆಗಳನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಶಾಸನಸಭೆಗಳನ್ನು ಏಕೀಕೃತ ಡಿಜಿಟಲ್ ವೇದಿಕೆಗೆ ತರುವ ಗುರಿಯನ್ನು ಹೊಂದಿದೆ.
ತುಂಗಭದ್ರಾ ಜಲಾಶಯದ ೧೯ನೇ ಗೇಟ್ ಎಲ್ಲಾ ಗೇಟ್ ಗಳ ಜೊತೆ ಮುಂದಿನ ರ್ಷವೇ ಬದಲಾಯಿಸಿ : ದರೂರು ಪುರುಷೋತ್ತಮ್ ಗೌಡ